ಮುಖವಾಡ
ಮುಖವಾಡ
ಇದೊಂದು ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದಿರಬಹುದಾದ ಘಟನೆ. ಚನ್ನಪಟ್ಟಣ ದ ಬಳಿಯ ಒಂದು ಗ್ರಾಮದಲ್ಲಿ ರಾಜಣ್ಣ ಒಬ್ಬ ರೈತ .ತಂದೆ ತಾಯಿ ಇಬ್ಬರೂ ಹದಿನೈದು ದಿನಗಳ ಅಂತರದಲ್ಲಿ ಕಾಲವಾಗಿ , ಇದ್ದ ಒಬ್ಬಳೇ ತಂಗಿಯ ಜವಾಬ್ದಾರಿ ರಾಜ ಣ್ಣನ ಹೆಗ ಲಿಗೆ ಬಿತ್ತು.ಪಕ್ಕದ ಹಳ್ಳಿಯ ಪಟೇಲರ ಮಗ ಚಂದ್ರಣ್ಣ ತನ್ನ ತಂಗಿಗೆ ಸರಿಯಾದ ವರ ಅಂತ ಹೋಗಿ ಮಾತುಕತೆ ಮುಗಿಸಿ ಮದುವೆಯನ್ನು ಅದ್ದೂರಿಯಾಗಿ ಮಾಡಿದ.
ತಾನೊಂದು ಬಗೆದರೆ ದೈವ ಒಂದು ಬಗೆಯಿತು ಅನ್ನುವ ಹಾಗೆ ಮದುವೆಯಾಗಿ ಮೂರೇ ತಿಂಗಳಲ್ಲಿ ಚಂದ್ರಣ್ಣ ಕಬ್ಬಿನ ಗದ್ದೆಯಲ್ಲಿ ಕೆಲಸಮಾಡುತ್ತಿದ್ದ ಸಮಯದಲ್ಲಿ ಹಾವು ಕಚ್ಚಿ ತಕ್ಷಣ ಚಿಕಿತ್ಸೆ ಸಿಗದೆ ಪ್ರಾಣ ಬಿಟ್ಟ. ವಿಧಿ ಇಲ್ಲದೇ ತನ್ನ ಮನೆಗೆ ತಂಗಿಯನ್ನು ಕರೆದುಕೊಂಡು ಬಂದ .ತಂಗಿ SSLC ವರೆಗೂ ಓದಿದ್ದರಿಂದ ಮನೆಯಲ್ಲಿ ಒಬ್ಬಳೇ ಕೂರುವ ಬದಲು ಕೆಲಸಕ್ಕಾದರೂ ಹೋದರೆ ಒಳ್ಳೆಯದೆಂದು ಯೋಚಿಸುತ್ತಿದ್ದಾಗ ಸ್ನೇಹಿತನೊಬ್ಬ ನಮ್ಮ MLA ಒಳ್ಳೆಯವರು . ಬಹಳ ಜನಕ್ಕೆ ಸಹಾಯ ಮಾಡಿದ್ದಾರೆ. ಬೇಕಾದರೆ ನನಗೆ ಪರಿಚಯದವರು ಬೆಂಗ ಳೂರಿನಲ್ಲಿ ಒಬ್ಬರಿದ್ದಾರೆ . ಅವರನ್ನ ಮೊದಲು ಬೇಟಿ ಮಾಡು ಅಂತ ಅವರ ವಿಳಾಸ ಕೊಟ್ಟಾಗ ಮಾರನೆ ದಿನ ವೇ ಬೆಂಗಳೂರಿಗೆ ಹೊರಟ.
ಮೆಜೆಸ್ಟಿಕ್ ಹತ್ತಿರದ ಒಂದು ಹೋಟೆಲ್ ರೂಮ್ ನಲ್ಲಿ ಆ ವ್ಯಕ್ತಿ ಇದ್ದ. ಅವನನ್ನ ಕಂಡು ವಿಷಯ ತಿಳಿಸಿ ಹೇಗಾದರೂ ಮಾಡಿ ಒಂದು ಕೆಲಸ ಕೊಡಿಸಬೇಕೆಂದು ಕೈ ಮುಗಿದ. ಅದಕ್ಕೆ ನಾನು MLA ಅಲ್ಲಪ್ಪ ನಾಳೆ ಅವರಿಗೆ ಹೇಳಿ ಹೇಗಾದರೂ ಸಹಾ ಯಮಾಡಿ ಅಂತ ಹೇಳಬಹುದು ಅಷ್ಟೇ. ನಾನು ಹೇಳಿ ದರೆ ಮಾಡಿಕೊಟ್ಟೇ ಕೊಡ್ತಾರೆ ಅದು ಬೇರೆ ವಿಷಯ. ಆಗಲ್ಲ ಅನ್ನೋ ಮಾತೇ ಇಲ್ಲ. ಅದರಲ್ಲೂ ಹಳ್ಳಿಯವ ರೆಂದರೆ ಅವರಿಗೆ ಬಹಳ ಅಭಿಮಾನ ಅಂತ ಹೇಳಿ ಸ್ವಲ್ಪ ಹಣ ಖರ್ಚಾಗುತ್ತೆ . ಸರ್ಕಾರಿ ಕೆಲಸ ಅಂದ ಮೇಲೆ ನಿಮ ಗೆಲ್ಲಾ ಗೊತ್ತಿರೋದು ತಾನೇ ಅಂದ. ಎಷ್ಟು ಖರ್ಚಾಗಬ ಹುದು ಅಂತ ಕೇಳಿದ್ದಕ್ಕೆ. ಸುಮಾರು ಐವತ್ತು ಸಾವಿರ ಆಗಬಹುದು. ಕೆಲಸ ಮಾತ್ರ ಗ್ಯಾರಂಟಿ. ಒಳ್ಳೆ ಕಡೆ ಪೋಸ್ಟಿಂಗ್ ಬೇಕೆಂದರೆ ಇನ್ನೂ ಒಂದು ಇಪ್ಪತ್ತು ಆಗುತ್ತೆ. ನಿಮ್ಮಹಳ್ಳಿಗೆ ಹತ್ತಿರ ಯಾವುದಾದರೂ ಊರಿಗೆ ಹಾಕಿಸಿ ಕೊಡಬಹುದು. ಯೋಚನೆ ಮಾಡು. ಹದಿನೈದು ದಿನದ ಲ್ಲಿ ನಮ್ಮ ಸಾಹೇಬರು ಐವತ್ತು ಜನರನ್ನ ಕೆಲಸಕ್ಕೆ ಸೇರಿಸ ಬೇಕೆಂದಿದ್ದಾರೆ . ಈಗ ಬಿಟ್ಟರೆ ಇನ್ನೆರಡು ವರ್ಷ ಆಗಲ್ಲ. ನಿನ್ನ ತಂಗಿ ಹೆಸರು ಹೇಗಾದರೂ ಸೇರಿಸಿ ಬಿಡೋಣ ಸರಿ ಯಾದ ಸಮಯಕ್ಕೆ ಬಂದಿದಿಯೇ ಅಂದ. ಸಾರ್ ಜಮೀ ನು ಮಾರಿ ಬೇಕಾದರೆ ಹಣ ಹೊಂದಿಸ್ತಿನಿ ಸಾರ್ ಒಂದು ವಾರ ಟೈಂ ಕೊಡಿ ಸಾಕು ಅಂತ ಹೇಳಿ ಅಲ್ಲಿಂದ ವಾಪಸ್ ಬಂದ.
ಎರಡೇ ದಿನದಲ್ಲಿ ನೀರಾವರಿ ಜಮೀನು ಮಾರಿ ಬಂದ ಹಣವನ್ನ ಒಂದು ಕೈ ಚೀಲದಲ್ಲಿ ಹಾಕ್ಕೊಂಡು ಅದೇ ಹೋಟೆಲ್ ಗೆ ಬಂದ. ಬಾಗಿಲು ತಟ್ಟಿದ. ಬಾಗಿಲು ತೆಗೆದು ಅದೇ ಮನುಷ್ಯ ಒಳಗೆ ಕರೆದು, ಅಲ್ಲಿದ್ದ ಕುರ್ಚಿ ಯಲ್ಲಿ ಕುಳಿತುಕೊಳ್ಳಲು ಹೇಳಿದ.ಇವನು ಬೇಡವೆಂದ. ಬಲವಂತವಾಗಿ ಮೇಲೆ ಕೂಡಿಸಿದ. ಬೆಲ್ ಮಾಡಿ ರೂ ಮ್ ಬಾಯ್ ಗೆ ಎರಡು ಕಾಫಿ ತರಲು ಹೇಳಿದ ಕಾಫಿ ಬಂತು ಕುಡಿಯಲು ಕೊಟ್ಟು ತಾನೂ ಕುಡಿದ .ತಂದಿದ್ದ ಕೈ ಚೀಲ ಕೊಡಲು ಅಯ್ಯೋ ಅದನ್ನ ನಾನು ಕೈ ಇಂದ ಸಹಾ ಮುಟ್ಟಲ್ಲ. ಅದೇನಿದ್ರು ನಮ್ಮ ಅಣ್ಣನ ವ್ಯವಹಾರ ಅಂದ. ಸಾರ್ ಬೆಂಗಳೂರಿನ ಜನ ಅಂದರೆ ಭಯ ಇದು ನಿಮ್ಮ ಹತ್ತಿರ ಇರಲಿ ಅಂದಾಗ ಭಯ ಆದರೆ ಕೊಡಪ್ಪ ಇಲ್ಲೇ ಇಟ್ಟಿರುತ್ತೇನೆ ಅಂತ ತೆಗೆದು ತಲೆಹತ್ತಿರ ಇಟ್ಟುಕೊಂಡ. ಒಂದು ಕೆಲಸ ಮಾಡು ಕೆಳಗೆ ಧೋಬಿ ಅಂಗಡಿ ಇದೆ ಹತ್ತು ರೂಪಾಯಿ ಕೊಟ್ಟು ರೂಮ್ ನಂಬರ್ 52 ಅಂತ ಹೇಳಿದರೆ ಬಟ್ಟೆ ಕೊಡುತ್ತಾನೆ ಸ್ವಲ್ಪ ತಂದು ಬಿಡು ಅಂತ ಇವನನ್ನೇ ಕಳುಹಿಸಿದ. ಆ ಕಡೆ ಅವನು ಹೋದ ತಕ್ಷಣ ಚೀಲದಲ್ಲಿ ಹಣ ನೋಡಿ ಲಕ್ಷ್ಮೀ ಮನೇಗೆ ಬಂದಿದ್ದಾಳೆ ಎಂದು ಸಂತೋಷ ಪಟ್ಟ. ಬಟ್ಟೆ ಬದಲಾಯಿಸಿ ಹಣದ ಚೀಲ ಮತ್ತೆ ಇವನಿಗೆ ಕೊಟ್ಟು ನಿನ್ನ ಹತ್ತಿರ ಇರಲಿ ಹೆದರಿಕೆ ಬೇಡ ನಾನು ಇದೀನಿ.ಎಂದು ಹೇಳಿ ಇಬ್ಬರೂ ಕೆಳಗೆ ಇಳಿದು ಬಂದರು.
ಒಂದು ಟ್ಯಾಕ್ಸಿ ಬಂದು ನಿಂತಾಗ ಕುಳಿತುಕೊಳ್ಳಲು ಹೇಳಿದ. ವಿಧಾನ ಸೌಧದ ಬಳಿ ಬಂದು ನಿಂತಾಗ ಇಬ್ಬರೂ ಕೆಳಗೆ ಇಳಿದರು. ಮೂವತ್ತು ರೂಪಾ ಯಿ ರಾಜಣ್ಣನ ಕೈಲೇ ಕೊಡಿಸಿದ. ಚೀಲ ಹುಷಾರು ಅಂತ ಹೇಳಿ ವಿಧಾನ ಸೌಧ ಕಡೆ ನಡೆದು ಬಂದರು. ಅಲ್ಲಿಯ ವರೆಗೂ ರಾಜಣ್ಣ ವಿಧಾನ ಸೌಧ ನೋಡಿದ್ದಿಲ್ಲ. ಎದುರಿಗೆ ಬರುತ್ತಿದ್ದ ಒಬ್ಬವ್ಯಕ್ತಿ ಯನ್ನ ಸಾಹೇಬರು ಬಂದಿದಾರಾ ಅಂತ ಕೇಳಿದ ಇಲ್ಲ ಅಂದ ಆ ವ್ಯಕ್ತಿ. ಆಗ ಮಧ್ಯಾನ್ಹ ಹನ್ನೆರಡು ಗಂಟೆ. ಮೊದಲು ಊಟಕ್ಕೆ ಹೋಗೋಣ ಅಂತ ಆಟೋದಲ್ಲಿ ಒಂದು ಹೋಟೆಲ್ ಗೆ ಬಂದ ರು .
ರಾಜಣ್ಣ ಅದುವರೆಗೂ ಅಂತಹ ದೊಡ್ಡ ಹೋಟೆಲ್ ನೋಡಿರಲಿಲ್ಲ. ಊಟ ಆರ್ಡರ್ ಮಾಡಿದ. ಎಷ್ಟು ಬೇಕಾದ್ರೂ ತಿನ್ನಬಹುದು ಎಂದು ಮೊದಲೇ ಹೇಳಿದ. ಹೊಟ್ಟೆ ತುಂಬಾ ತಿಂದು ಬಹಳ ಚೆನ್ನಾಗಿದೆ ಅಂತ ಸಂತೋಷಪಟ್ಟು. ಇನ್ನೂರು ರೂಪಾಯಿ bill ನೋಡಿ ಹೆದರಿದ.ಕೊಟ್ಟಿರು ನಾನು purse ಮರೆತು ಬಂದೆ ರೂಂಗೆ ಹೋದಮೇಲೆ ಕೊಡ್ತೀನಿ ಅಂದ. ಅದಕ್ಕೂ ರಾಜಣ್ಣನೇ ಕೊಟ್ಟ. ಮತ್ತೆ ಹೊರಗೆ ಬಂದಾಗ ಅಲ್ಲಿ ಯಾರ ಹತ್ತಿರಾನೋ ಮಾತನಾಡಿ ಸಾಹೇಬರು ಇದ್ದಾರಂ ತೆ ನಡಿ ಇನ್ನೆಲ್ಲಾದರೂ ಹೊರಟು ಹೋದರೆ ಕಷ್ಟ ಅಂತ ಬೇಗಬೇಗ ಹೊರಟರು.ಅಲ್ಲಿಗೆ ಬಂದಾಗ ಮತ್ತೆ ಯಾರ ನ್ನೋ ಕೇಳಿದ ಸಾಹೇಬರು ಇದ್ದಾರಾ ?. ಅವರು ಈಗ ಮೀಟಿಂಗ್ ಗೆ ಹೋದರು ಅಂದ. ಪಕ್ಕದಲ್ಲಿದ್ದ ಒಂದು ರೂಮಿಗೆ ಹೋದರು . ಅಲ್ಲಿ ಮೂರು ನಾಲ್ಕು ಜನ ಕಾಫಿ ಕುಡೀತಾ ಇದ್ದರು. ಒಬ್ಬನಿಗೆ ಹೇಳಿದ ಇವರ ತಂಗಿಯ ಹೆಸರು ಸೇರಿಸಕ್ಕೆ ಆಗುತ್ತಾ . ಆಗತ್ತೆ ಏಕೆ ಆಗಲ್ಲ .ನೀನು ಹೇಳಿದ ಮೇಲೆ ಆಯ್ತು ಬಿಡು ಅಂದರು. ರಾಜಣ್ಣನ ಮುಖದಲ್ಲಿ ನಗು. ಏನಪ್ಪಾ ಅದೃಷ್ಟ ಸಾಹೇಬರನ್ನ ನೋಡದೆ ನಿನ್ನ ಕೆಲಸ ಆಗಿಹೋಯ್ತು ಅಂದ .ನೀನು ಊರಿಗೆ ಹೋಗಿ ಮುಂದಿನ ತಿಂಗಳು ಬರುವಾಗ ನಿನ್ನ ತಂಗಿಯನ್ನ ಕರೆದುಕೊಂಡು ಬಾ ಕೆಲವು ಕಡೆ ರುಜು ಮಾಡಬೇಕಾಗುತ್ತದೆ ಅಂದ . ಮರೆಯದೆ ಚೀಲ ವಾಪಸ್ ತೆಗೆದುಕೊಂಡು ರೈಲು ನಿಲ್ದಾಣಕ್ಕೆ ಬಾಡಿಗೆ ಕಾರಿನಲ್ಲೇ ಕಳಿಸಿ ಕೊಟ್ಟ .
ಒಂದು ತಿಂಗಳ ನಂತರ ತಂಗಿ ಜೊತೆ ಅದೇ ಹೋಟೆಲ್ ರೂಮ್ ಗೆ ಬಂದಾಗ ತಿಳಿಯಿತು ಅವನು ಖಾಲಿ ಮಾಡಿ ಒಂದು ತಿಂಗಳಾಗಿದೆ ಎಂದು. ಯಾರನ್ನ ಕೇಳಿದರು ಅವ ನು ಯಾರು ಎಲ್ಲಿಗೆ ಹೋಗಿದ್ದಾನೆ ಒಂದೂ ಗೊತ್ತಿಲ್ಲ. ಆಗ ಪಾಪ ತಾನು ಮೋಸ ಹೋಗಿರುವುದು ಅರಿವಾಯ್ತು. ಊರಿಗೆ ವಾಪಸ್ ಬಂದ . ರಾಜಣ್ಣ ಸಾಯುವವರೆಗೂ ಬೆಂಗಳೂರಿನ ಕಡೆ ಮುಖ ಮಾಡಲಿಲ್ಲ ಪಾಪ.