ಸಿಡಿಲ ಮರಿ
ಸಿಡಿಲ ಮರಿ
ಸಿಡಿಲಮರಿ ಸ್ವಾಮಿ ವಿವೇಕಾನಂದ.
ಇಚ್ಚಾ ಶಕ್ತಿಯ ಸರ್ಧಾರನಾತ.
ಕಡಲ ಕಿನಾರೆ ಕನ್ಯಾಕುಮಾರಿಯ ಸಂಚಾರಿ
ಅವನ ವಾಣಿಗಳೋ ವಿದ್ಯುತ್.!
ಸಪ್ತ ಸಾಗರದಾಚೆ ಹೋಗಿ
ಹಿಂದೂ ದರ್ಮವ ಸಾರಿದ ಸಂತ.
ಎಳಿ ಎದ್ದೇಳಿ ಗುಡುಗಿದಾಗ
ಮೂಡಿ ಬಂತು ಭಾರತಕ್ಕೆ ವಸಂತ.!
ಶಕ್ತಿಯೇ ಜೀವನ ಅಶಕ್ತಿಯೇ ಮರಣ.
ಯುಕ್ತಿಯೂ ಬೇಕು ಬಾಳಿಗೆ..
ನಂಬುವುದಾದರೆ ಪರೀಕ್ಷಿಸಿ ನೋಡು
ಎಂದು ಸಾರಿಹನು ನಮಗೆ..
ಸೋಲುವೆನೆಂಬ ಚಿಂತೆ ಮಾಡಬೇಡ..
ಸೋತರೆ ಮಣ್ಣಾಗಿಬಿಡು ಸುಮ್ಮನೆ..
ಮಣ್ಣಲ್ಲಿನ ಬೀಜ ಮತ್ತೆ ಚಿಗಿ ಚಿಗಿತು
ಸಸಿ ಹುಟ್ಟಿ ವೃಕ್ಷವಾಗುವಂತೆ ಬದುಕಿಬಿಡು.