ಕವನ :- ಗುರು ಮದ್ವಾಚಾರ್ಯರು
ಕವನ :- ಗುರು ಮದ್ವಾಚಾರ್ಯರು
ದ್ವೈತ ಪ್ರತಿಪಾದಕ ಗುರು ಮದ್ವಚಾರ್ಯರರು
ಮದ್ವರಾಗಿ ದ್ವೈತ ಮತ ಸ್ಥಾಪಿಸಿ
ಧರೆಯೊಳು ಪಂಚಭೇದ ತೋರಿಸಿ
ಜ್ಞಾನದ ಜ್ಯೋತಿಯ ಬಳಗಿಸಿ
ಹನುಮ ಭೀಮ ಮದ್ವರಾಗಿ
ಕಲಿಯುಗದ ಜಗದ್ಗುರಗಳಾಗಿ
ಸರ್ವೋತ್ತಮತ್ವ ಸಾರಿದವರಾಗಿ
ಧರೆಯ ಅಂಧಾಕಾರವ ಓಡಿಸಲು
ಮೂರನೇ ಅವತಾರವೆತ್ತಿ ಬಂದ
ಮಧ್ಯಗೇಹ ವೇದವತಿ ಕಂದ
ಹಂಸನಾಮಕ ಪೀಠದಿ ಬಂದು
ವಾದಿಗಳ ನೀರ್ವಾದವಮಾಡಿ
ಅಷ್ಟ ಮಠಗಳ ಸ್ಥಾಪಿತರಾಗಿ
ಅನುಯಾಯಿಗಳಿಗೆ ಮಾರ್ಗವ ಹಾಕಿ
ಒಲಮೆಯಲಿ ನಿಖಿಳರನು ಉದ್ದರಿಸಿ
ಬದರಿಗೆ "ಪ್ರಿಯಕೃಷ್ಣ"ನಲ್ಲಿ ಸಾಗಿದಿರಿ